-: ಸಾಗರ ಉಪವಿಭಾಗದ ಸಾಮಾನ್ಯ ಮಾಹಿತಿ :-
HOME       |       ABOUT OFFICE        |      ADMINISTRATION      |        TAHSILDAR       |       CONTACT US        |      GALLERY
ಕರ್ನಾಟಕ ಸರ್ಕಾರ
ಸಾಗರ ಉಪವಿಭಾಗಾಧಿಕಾರಿಗಳ ಕಛೇರಿಗೆ ಮಂಜೂರಾದ ಹುದ್ದೆಗಳು:

01.        ಉಪವಿಭಾಗಾಧಿಕಾರಿಗಳು                           01
02.        ತಹಶೀಲ್ದಾರ್ ಶ್ರೇಣಿ-2                                01
03.        ಪ್ರಥಮ ದರ್ಜೆ ಸಹಾಯಕರು                     04
04.        ದ್ವಿತೀಯ ದರ್ಜೆ ಸಹಾಯಕರು                  03
05.        ಶೀಘ್ರಲಿಪಿಗಾರರು                                        01
06.        ಬೆರಳಚ್ಚುಗಾರರು                                        01
07.        ವಾಹನ ಚಾಲಕರು                                      01
08.        ದಫೇದಾರ್                                                   01
09.        ಡಿ ಸಮೂಹದ ನೌಕರರು                             02
ಉಪವಿಭಾಗಾಧಿಕಾರಿಗಳ ಕಾರ್ಯಾಲಯದಲ್ಲಿ ಕೆಳಕಂಡ ಸಾಮಾನ್ಯ ಕಾರ್ಯಗಳನ್ನು ಪ್ರಮುಖವಾಗಿ ನಿರ್ವಹಿಸುತ್ತದೆ. 
01.    ಉಪವಿಭಾಗದ ದಂಡಾಧಿಕಾರತ್ವದ ಮೂಲಕ ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡುವುದು.
02.    ಆಹಾರ ಮತ್ತು ನಾಗರೀಕ ಸರಬರಾಜು ಹಾಗು ಸಾರ್ವಜನಿಕ ವಿತರಣಾ ವ್ಯವಸ್ಥೆಯ ಬಗ್ಗೆ ಪರಿಶೀಲನೆ ಮಾಡುವುದು.
03.    ಚುನಾವಣೆಯ ಎಲ್ಲಾ ಪ್ರಕ್ರಿಯೆಗಳ ಮೇಲ್ವಿಚಾರಣೆ ನೋಡಿಕೊಳ್ಳುವುದು. 
04.    ಪ್ರಕೃತಿ ವಿಕೋಪ ನಿರ್ವಹಣೆ, ನೈಸರ್ಗಿಕ ಮತ್ತು ಮಾನವ ನಿರ್ಮಿತ ವಿಕೋಪಗಳಿಂದ ಬಾಧಿತರಾದವರಿಗೆ ಪರಿಹಾರ ನೀಡುವ ಬಗ್ಗೆ ತಹಶೀಲ್ದಾರರಿಂದ ಸ್ವೀಕರಿಸಿದ ಪ್ರಸ್ತಾವನೆಗಳನ್ನು ನಿಯಮಾನುಸಾರ ಪರಿಶೀಲಿಸಿ ಅರ್ಹ ಪ್ರಕರಣಗಳನ್ನು ಪರಿಹಾರ ಮಂಜೂರಿಗಾಗಿ  ಜಿಲ್ಲಾಧಿಕಾರಿಗಳವರಿಗೆ ಶಿಫಾರಸ್ಸು ಮಾಡುವುದು. 
05.    ಸ್ವಾತಂತ್ರ್ಯ ಹೋರಾಟಗಾರರ ಪಿಂಚಣಿ ಮಂಜೂರಿಗಾಗಿ ಬರುವ ಅರ್ಜಿಗಳನ್ನು ಪರಿಶೀಲಿಸಿ ನಿಯಮಾನುಸಾರ ಜಿಲ್ಲಾಧಿಕಾರಿಗಳವರಿಗೆ ಶಿಫಾರಸ್ಸು ಮಾಡುವುದು.
06.    ಸರಕಾರ ಮತ್ತು ಸಂಸ್ಥೆಗಳಿಗೆ ವಿವಿಧ ಉದ್ದೇಶಗಳಿಗೆ ಭೂ ಸ್ವಾಧೀನ ಪ್ರಕ್ರಿಯೆ ಕೈಗೊಳ್ಳುವುದು.
07.    ಭೂ ಪರಿವರ್ತನೆ ಬಗ್ಗೆ ಸ್ಥಳ  ಪರಿಶೀಲಿಸಿ  ವರದಿ ಸಲ್ಲಿಸುವುದು.
08.    ಕರ್ನಾಟಕ ಭೂ ಕಂದಾಯ ಕಾಯಿದೆಯ ವಿವಿಧ ಕಲಂ ಗಳ  ಅಡಿಯಲ್ಲಿ ಮೇಲ್ಮನವಿ ಇತ್ಯರ್ಥಪಡಿಸುವುದು.
09.    ಪಿ.ಟಿ.ಸಿ.ಎಲ್. ಪ್ರಕರಣಗಳ ವಿಚಾರಣೆ ನಡೆಸುವುದು
10.    ಮಾಹಿತಿ ಹಕ್ಕು ಕಾಯಿದೆ ಅಡಿ ಮೇಲ್ಮನವಿ ಪ್ರಾಧಿಕಾರಿಯಾಗಿ ಕಾರ್ಯನಿರ್ವಹಿಸುವುದು
11.    ಉಪವಿಭಾಗದ ನಾಲ್ಕು ತಾಲ್ಲೂಕುಗಳ ರೈತ ಆತ್ಮಹತ್ಯೆ ಪ್ರಕರಣಗಳು, ಆಕಸ್ಮಿಕ ಬೆಂಕಿ ಅನಾಹುತ ಮತ್ತು ಹಾವು ಕಚ್ಚಿ ಮೃತ ಪಡುವ ಸಂಬಂಧ ತಾಲ್ಲೂಕುಮಟ್ಟದ ಸಮಿತಿಯ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುವುದು.
12.    ಗ್ರಾಮಲೆಕ್ಕಾಧಿಕಾರಿಗಳ ವೃಂದದ ನೌಕರರಿಗೆ ಶಿಸ್ತು ಪ್ರಾಧಿಕಾರಿಯಾಗಿ ಕರ್ತವ್ಯನಿರ್ವಹಿಸುವುದು.
13.    ಜಿಲ್ಲಾಧಿಕಾರಿಗಳಿಂದ ಆದೇಶಿಸಲ್ಪಟ್ಟ ಸಿ.ಸಿ.ಎ. ಪ್ರಕರಣಗಳ ವಿಚಾರಣೆ ನಡೆಸುವುದು.
14.    ಜಮಾಬಂಧಿ ಕಾರ್ಯನಿರ್ವಹಿಸುವುದು.
15.    ನೆಮ್ಮದಿ, ಪಡಸಾಲೆ, ಮೋಜಣಿ ಹಾಗೂ ಭೂಮಿ ಕೇಂದ್ರಗಳ ಮೇಲ್ವಿಚಾರಣೆ ನಡೆಸುವುದು. 
16.    ಉಪವಿಭಾಗದ ಸಾಗರ ಮತ್ತು ಶಿಕಾರಿಪುರ ತಾಲ್ಲೂಕುಗಳ ಆರೋಗ್ಯ ರಕ್ಷಾ ಸಮಿತಿ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುವುದು.
17.    ಶಿಕಾರಿಪುರ ತಾಲ್ಲೂಕಿನ  ಅಂಜನಾಪುರ & ಅಂಬ್ಲಿಗೊಳ ಜಲಾಶಯದ ನೀರಾವರಿ ಸಲಹಾ ಸಮಿತಿ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುವುದು.
18.    ಉಪವಿಭಾಗೀಯ ಅರಣ್ಯ ಹಕ್ಕು ಸಮಿತಿ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುವುದು.
19.    ಸಾಗರ ಉಪವಿಭಾಗದ ಎಲ್ಲಾ ತಾಲ್ಲೂಕು ಕ್ರೀಡಾಂಗಣ ಸಮಿತಿ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುವುದು.
20.    ಭೂ ನ್ಯಾಯ ಮಂಡಳಿ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುವುದು.
21.    ಮುಖ್ಯಮಂತ್ರಿಗಳ ಸಣ್ಣ ಮತ್ತು ಮಧ್ಯಮ ಪಟ್ಟಣಗಳ ಅಭಿವೃದ್ಧಿ ಕಾರ್ಯಕ್ರಮ ಕ್ರಿಯಾ ಯೋಜನೆ ಸಮಿತಿ (CMSMTDP) ಅಧ್ಯಕ್ಷರಾಗಿ ಕಾರ್ಯನಿರ್ವಹಿಸುವುದು.
22.    ಸಮಗ್ರ ಶಿಶು ಅಭಿವೃದ್ಧಿ ಯೋಜನೆ ಸಮಿತಿ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುವುದು.
23.    ಪ್ರಸವಪೂರ್ವ ಭ್ರೂಣ ಲಿಂಗ ಪತ್ತೆ ನಿಷೇಧ ತಾಲ್ಲೂಕುಮಟ್ಟದ ಸಮಿತಿ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುವುದು.
24.    ಪರಿಶಿಷ್ಠ ಜಾತಿ ಪರಿಶಿಷ್ಠ ಪಂಗಡ ದೌರ್ಜನ್ಯ ತಡೆ ಉಪವಿಭಾಗೀಯ ಸಮಿತಿ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುವುದು.

HOME        |        ABOUT US         |       OFFICE STAFF       |         TAHSILDAR        |        CONTACT US         |       GALLERY
Design & Maintained by Invance InfoTech, SHIMOGA
Copyright © 2022 www.acsagar.in. All rights reserved
ಉಪವಿಭಾಗದ ದಂಡಾಧಿಕಾರಿಯಾಗಿ ಉಪವಿಭಾಗಾಧಿಕಾರಿಗಳು ಈ ಕೆಳಗಿನ ಕಾಯ್ದೆಗಳಡಿಯಲ್ಲಿ ಅಧಿಕಾರ ಹಾಗೂ ಕರ್ತವ್ಯ ಹೊಂದಿರುತ್ತಾರೆ.
01.    ದಂಡ ಪ್ರಕ್ರಿಯಾ ಸಂಹಿತೆ, 1974
02.    ಕರ್ನಾಟಕ ಪೊಲೀಸ್ ಅಧಿನಿಯಮ 1963
03.    ಜೀತದಾಳು ಪದ್ಧತಿ ಅಧಿನಿಯಮ 1976
04.    ಭಾರತೀಯ ಮುದ್ರಾಂಕಿತ ಅಧಿನಿಯಮ 1899
05.    ನ್ಯಾಯಾಧೀಶನ ಅಧಿನಿಯಮ 1965
06.    ಭಾರತ ತಂತಿ ಅಧಿನಿಯಮ 1985
07.    ಸಾರ್ವಜನಿಕ ಆರೋಗ್ಯ ಅಧಿನಿಯಮ 1964
08.    ಕರ್ನಾಟಕ ಮಾರಾಟಗಾರರ ಅಧಿನಿಯಮ 1957 
09.    ನ್ಯಾಯವಾದಿಗಳ ಅಧಿನಿಯಮ 961
10.    ಪರಿಶಿಷ್ಠ ಜಾತಿ ಪರಿಶಿಷ್ಠ ವರ್ಗಗಳ ಅಧಿನಿಯಮ 1989
11.    ಕರ್ನಾಟಕ ಆಹಾರ ಮತ್ತು ನಾಗರೀಕ ಸೇವಾ ಅಧಿನಿಯಮ
12.    ಮುಜರಾಯಿ ಇಲಾಖೆ ಸೇರಿದ ದೇವಸ್ಥಾನಗಳ ಜೀರ್ಣೋದ್ಧಾರ.